ಪೋಷಕರ ಜವಾಬ್ದಾರಿಗಳ ಸುತ್ತ ಅನಾವರಣಗೊಳ್ಳಲಿರುವ `ಬಾಲ್ಯ`!ಸುಲ್ತಾನ್ ರಾಜು ನಿರ್ದೇಶನದ ಚಿತ್ರ
Posted date: 20 Mon, Nov 2023 06:29:36 PM
ಉಳ್ಳವರು, ಬಡವರು, ವಿದ್ಯಾವಂತರು, ಅವಿದ್ಯಾವಂತರು ಯಾರೇ ಆಗಲಿ, ತಮ್ಮ ಮಕ್ಕಳು ಒಳ್ಳೆ ರೀತಿಯಲ್ಲಿ ಬೆಳೆಯಬೇಕು. ತಾವು ಅನುಭವಿಸಿದ ಕಷ್ಟಗಳು ಅವರು ಅನುಭವಿಸಬಾರದು… ಅಂತಾ ಬಯಸುತ್ತಾರೆ. ತಮ್ಮ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಹಗಲಿರುಳೂ ಅವರ ಭವಿಷ್ಯವನ್ನೇ ಗಮನದಲ್ಲಿಟ್ಟುಕೊಂಡು ಬದುಕು ಸಾಗಿಸುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಾವೂ ಶ್ರಮಿಸುತ್ತಾರೆ. ಒಟ್ಟಾರೆ ಮಕ್ಕಳ ಬೆಳವಣಿಗೆ, ಭವಿಷ್ಯದ ವಿಚಾರದಲ್ಲಿ ಹೆತ್ತವರ ಪಾತ್ರ ಮಹತ್ತರವಾಗಿರುತ್ತದೆ.
 
ಈ ವರೆಗೆ ಮಕ್ಕಳ ಕುರಿತು ಸಾಕಷ್ಟು ಸಿನಿಮಾಗಳು ತಯಾರಾಗಿವೆ. ಆದರೆ, ಮಕ್ಕಳ ಬಗೆಗೆ ಈ ವರೆಗೆ ಎಲ್ಲೂ ಬಾರದ ಅಪರೂಪದ ಕಥೆಯನ್ನು ಆಧರಿಸಿ ಚಿತ್ರವೊಂದು ರೂಪುಗೊಂಡಿದೆ. ಈ ಚಿತ್ರದ ಹೆಸರೇ `ಬಾಲ್ಯ`. 

ಮಕ್ಕಳು ಬಾಲ್ಯಾವಸ್ಥೆಯಲ್ಲಿದ್ದಾಗ ಪೋಷಕರ ಪಾತ್ರ ಎಷ್ಟು ಮುಖ್ಯವಾಗಿರುತ್ತದೆ… ತಂದೆ ತಾಯಿ ತೆಗೆದುಕೊಳ್ಳುವ ತೀರ್ಮಾನಗಳು ಅವರ ಭವಿಷ್ಯವನ್ನು ಹೇಗೆ ನಿರ್ಧರಿಸುತ್ತವೆ? ಅವರ ಒಟ್ಟಾರೆ ಬದುಕಿನ ಮೇಲೆ ಎಂಥಾ ಪರಿಣಾಮ ಬೀರುತ್ತದೆ? ಎಂಬಿತ್ಯಾದಿ ಅಂಶಗಳನ್ನು `ಬಾಲ್ಯ`  ಚಿತ್ರ ಅನಾವರಣಗೊಳಿಸಲಿದೆ. 
 
ಈ ಹಿಂದೆ ಜಗ್ಗೇಶ್ ಅಭಿನಯದ ಸುಲ್ತಾನ ಮತ್ತು ಜಗ್ಗಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ವಿ.ಎಂ. ರಾಜು (ಸುಲ್ತಾನ್ ರಾಜು) `ಬಾಲ್ಯ` ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಹಿಂದೆ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾಗಳನ್ನು ನೀಡಿದ್ದ ರಾಜು ಈ ಸಲ ಮಕ್ಕಳ ವಿಚಾರಗಳ ಸುತ್ತಲಿನ ಸಂದೇಶವಿರುವ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
 
ಶ್ರೀ ಜಗನ್ಮಾತೆ ಎಂಟರ್ಪ್ರೈಸಸ್ ಲಾಂಛನದಲ್ಲಿ ಎನ್. ಸತ್ಯನಾರಾಯಣಾಚಾರ್ ವಿಶ್ವಕರ್ಮ `ಬಾಲ್ಯ`ವನ್ನು ನಿರ್ಮಿಸಿದ್ದಾರೆ. ಇಂದು ವಿಶ್ವನಾಥ್ ಮತ್ತು ಎ.ಟಿ. ರವೀಶ್ ಸಂಗೀತ ನಿರ್ದೇಶನ, ರಮೇಶ್ ಕೋಯಿರ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ, ನೀಲ್ ಕಮಲ್ ಕೆಂಗಾಪುರ ಸಾಹಿತ್ಯ ಈ ಚಿತ್ರಕ್ಕಿದೆ. 
 
ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಪೂರೈಸಿರುವ ಈ ಚಿತ್ರದಲ್ಲಿ ಶಾಲಾ ಮಕ್ಕಳು ಸೇರಿದಂತೆ,
ನಾರಾಯಣಸ್ವಾಮಿ, ಬುಲ್ಲೆಟ್ ವಿನೋದ್, ಕುರಿರಂಗ, ನಿಶ್ಚಿತ, ಅಪ್ಸರ, ಶಶಿರೇಖಾ, ಗೋಲ್ಡನ್ ಗೌರಿ, ಸಿದ್ದೇಶ್ ಮಾಸ್ಟರ್ ಆರ್ಯಮನ್, ಮಾಸ್ಟರ್ ದಕ್ಷಿತ್, ಮಾಸ್ಟರ್ ಮನೀಶ್, ಮಾಸ್ಟರ್ ದತ್ತಾ, ಕುಮಾರಿ ಯೋಗಿತಾ, ಕುಮಾರಿ ದೀಕ್ಷಾ ಮೊದಲಾದವರ ತಾರಾಗಣವಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed